ಪ್ರೀತಿಯಿಲ್ಲದ ನನ್ನ ಬಾಳು,
ಚಂದಿರನಿಲ್ಲದ ಬೋಳು ಬಾನು.
ಬರೀ ಕಾಮೋ೯ಡದ ನೆರಳು.
ಆಗಾಗ ಗುಡುಗು, ಸಿಡಿಲು. ಮೊದಲೆಲ್ಲಾ
ಹನಿ ಹನಿಯಾಗಿ ತೊಟ್ಟಿಕ್ಕುತ್ತಿದ್ದ ಮಳೆ
ಈಗ ಭೀಕರ ಪ್ರವಾಹ.
ಹಿಂದೊಮ್ಮೆ ಆ ಚಂದಿರ ಕೇವಲ
ನನಗಾಗಿಯೇ ಬರುತ್ತಿದ್ದ.
ಶುಭ್ರ ಮೇಘವಾಗಿ ಬಿಚ್ಚು ಮನದಿಂದ
ತಬ್ಬುತ್ತಿದ್ದೆ. ಮುತ್ತಿಕ್ಕುತ್ತಿದ್ದೆ. ಆತನ
ಸಾಮ್ರಾಜ್ಯದಲ್ಲಿ ಸಾವಿರ ಚುಕ್ಕಿಯ
ರಂಗೋಲಿ ಬರೆಯುತ್ತಿದ್ದೆ.
ಈಗ ಆತನಿಗೆ ನನ್ನ ಮೇಲೆ ಮುನಿಸಂತೆ !
ಇರುಳ ತಂಪಲ್ಲೂ ನನ್ನೆದೆ ಧಗೆಯ ಉರಿ.
ಒಡಲಲ್ಲಿ ಚಿಗುರಿದ ಪ್ರೀತಿಯ ಕೂಸಿಗೆ
ಎಲ್ಲೋ ಗಭ೯ಪಾತವಾದಂತೆ.
ಮತ್ತೆ ಚಿಗುರಬಯಸಿದ ತಪ್ಪಿಗೆ
ಶಾಶ್ವತ ಅಮಾವಾಸ್ಯೆಯ ಕರಿನೆರಳು.
ಕದ್ದು ಕದ್ದು ಬರುವೆ ಏಕೆ
ಮೋಡದ ಮರೆಯಲ್ಲಿ ?
ನೀ ಬರುವ ದಾರಿಯಲ್ಲಿ ಕಾದು ಕುಳಿತು,
ಸತ್ತು ಘೋರಿಯಾಗಿದ್ದೆನೆ.
ನಿನ್ನ ಮೋಸದ ಬೆಳದಿಂಗಳಿಗಿಂತ
ಘೋರಿಯೊಳಗಿನ ಸತ್ಯ ತಂಪಾಗಿದೆ.
6 comments:
my god, how u campose the words yaar. its owesome
nice kavana :)
tumba chennagide guru.....
ನಿನ್ನ ಮೋಸದ ಬೆಳದಿಂಗಳಿಗಿಂತ
ಘೋರಿಯೊಳಗಿನ ಸತ್ಯ ತಂಪಾಗಿದೆ.....Vin
ಪ್ರೀತಿ ನೈಜತೆ ಸ್ಪಷ್ಟವಾಗಿ ಕಾಣುತ್ತಿದೆ .........ಲವ್ ಮಾಡದೋರು ಕವಿ ಆಗ್ತಾರೆ ಅಂತಾ ಕೇಳಿದ್ದೆ ಆದ್ರೆಇಷ್ಟೊಳ್ಳೆ ಕವನಾನಾ ಬರಿತಾರೆ ಅಂತಾ ಇಗ ತಿಳೀತು ....ಹ್ಯಾಟ್ಸ್ ಆಪ್ ಗುರು
ಇ ಕವನಾ ಬಾಳ ಇಷ್ಟ ಆಯಿತು ನಂಗೆ ಗುರು
Post a Comment