ಭಾವನೆಗಳಿಲ್ಲದ ಬದುಕು
ಭವದೊಳು ಸಾಗುತಿಹುದು,
ನೋಟ ಬೀರಿದಲ್ಲೆಲ್ಲಾ
ವಿಷಮಯ ಆಪತ್ತು ಕಾದಿಹುದು.
ಅಹಿಂಸೆ ಬೇಡಿದ ಜೀವ
ಹಿಂಸೆಗೆ ಬಲಿಯಾಗಿದೆ.
ಗಧ್ಗದಿತ ಕಂಠವಿಂದು
ಆಸರೆಯ ಬೇಡಿದೆ.
ಭೂಮಿಯ ಒರತೆಯು ಬತ್ತಿ,
ಬಾಯಾರಿ, ಬಿಸಿನೆತ್ತರ ಕುಡಿಯುತ್ತಿದೆ.
ದೈವ ನೀಡಿದ ಬದುಕು
ವ್ಯಥ೯ವಾಗಿ ಸಾಗುತ್ತಿದೆ.
ಎಲ್ಲರೊಳೂ "ತಾನು"
ಮನೆಮಾಡಿ, ಮಸಿಬಳಿದು
ಪರಚಿಂತೆಗೆಡೆಗೊಡದೆ
ಅಹಂಕಾರದಿ ಮೆರೆದಿಹುದು.
ಹಿತವರು ಯಾರು ?
ಸುತ್ತಲಿರುವವರೊಳು
ತನ್ನನ್ನೆ ತಾನು ನಂಬದ
ಅಪರಿಚಿತ ಜಗದೊಳು.
ಬೆನ್ನ ಹಿಂದಣ ನೆರಳಂತೆ
ಹಿಂಬಾಲಿಸಿದ ಈ ಕಮ೯,
ನೆಮ್ಮದಿಯ ಗುಡಿಸಲಿಗೂ ಬಿಡದು
ಬಾಧಿಸುವ ಧಮ೯.
No comments:
Post a Comment