ಸಾರಾಯಿ ನಶೆ, ನಿಶೆಯ ಮರೆಸುವ
ನೋವಿನೆದೆಯಲ್ಲೂ ಕೊಂಚ
ಸುಖವ ನೀಡುವ, ಗಾಯ ಮಾಯಿಸುವ
ಕಹಿ ಔಷಧಿಯಂತೆ !
ಕುಡಿದಾಗ ತಾನೇ ರಾಜ
ದಬಾ೯ರಿನಲ್ಲಿ ಯಾರಿಗೂ ಹೆದರುವವನಲ್ಲ
ರಸ್ತೆ ಬದಿಯ ಚರಂಡಿಗಳೇ
ತಮ್ಮ ಅರಮನೆಯ ಸುಪ್ಪತ್ತಿಗೆಗಳು
ಸಂವಾದಗಳಿಗೇನೂ ಕೊರತೆಯಿಲ್ಲ
ಸೂಜೀಮೊನೆಯ ಕಾರಣ ಸಾಕು
ತೊದಲು ಭಾಷೆಯ ವಾಗ್ಧಾಳಿಗೆ
ನ್ಯಾಯವಾದಿಗಳೂ ನಾಚಬೇಕು
ಮದಿರೆಯೇ ಮಡದಿ, ಸಂಗಾತಿ
ಸಂಗ ಅತಿ ದುಮ೯ರಣಕ್ಕೆ ನಾಂದಿ
ಸೇಂದಿಯೊಂದಿಗೆ ಬ್ರಾಂದಿಯೂ ನುಗ್ಗಿ
ಸ್ಮಶಾನ ಸಾರಥಿಗೆ ಸುಗ್ಗಿಯೋ ಸುಗ್ಗಿ
ಬೀದಿ ನಾಯಿಗಳು ಖಾಸಾ ದೋಸ್ತಿಗಳು
ದಿನವೂ ಇವರಿಗೆ ಕಂಪನಿ ಕೊಡುವವು
ಸಾರಾಯಿ ಸಾಮ್ರಾಟನ ಬಾಡಿಗಾಡು೯ಗಳು
ನಿತ್ಯ ಕಮ೯ವ ಪೂರೈಸುವವು
ಕುಡಿದಾಗ ಗೊತ್ತಿಲ್ಲ ನೀನ್ಯಾರೋ ನಾನ್ಯಾರೋ
ಏಕವಚನದ ಗೌರವ ಮರೆಯುವುದಿಲ್ಲ
ಕಣ್ಣಿಗೆ ಕಂಡದ್ದೂ ಕಾಣುವುದಿಲ್ಲ
ಮಾಯಾ ಜಿಂಕೆಯ ಬೆನ್ನಟ್ಟಿಹೆಯಲ್ಲ !
3 comments:
super poem....chennagide guru...keep it up
no comments, but wording are really good.
ನಿನ್ಯಾವಾಗ ಟೆಸ್ಟ್ ಮಾಡದೇ ಗುರು ......
Post a Comment