ನೊಂದ ಮನವು ನುಡಿವ ಸಾಲು,
ತೊರೆದ ಗೆಳತಿಯ ಪ್ರೀತಿ ಪಾಲು.
ಕಣ್ಣ ಹನಿಯ ಕರೆದು ಕೇಳು,
ಎದೆಯೊಳೆಷ್ಟು ತೀರದ ನೋವು.
ನೇನಪು ಸರಿದು, ಮತ್ತೆ ಬರಲು
ಬಿಕ್ಕುತಿಹುದು ಒಂಟಿ ಮನಸು.
ಕಡಲ ತಡಿಯ ಹೆಜ್ಜೆ ಗುರುತು,
ತಿರುಗಿ ನೋಡೆ ಇಲ್ಲ ಕುರುಹು.
ಮಾತು, ಮಾತು ಬೆರೆತ ಹೊತ್ತು
ಈಗ ಮೌನವೇ ನಿತ್ಯ ತುತ್ತು.
ರಾಗ, ಭಾವದ ಕಾವ್ಯ ಸಂಜೆಗೆ
ರಕ್ತ ಚೆಲ್ಲಿದ ಅಸ್ಥ ದಿಕ್ಕು.
ನಿನಗೆ ತರವೆ, ಓ ಒಲವೆ,
ಪ್ರೇಮದುಸಿರ ಕಡಿವ ಬಯಕೆ
ಬದುಕ ಬಯಸಿ "ಅಂಜಲಿ" ಪಿಡಿವೆ,
ಜನಿತ ತಮವನೊರೆಸಿ ಪೊರೆಯೆ.
1 comment:
Post a Comment